ನಾವು ಎಕ್ಸ್ಪೆಕ್ಟೇಶನ್ ಇಟ್ಕೊಂಡು, ಕಾಯ್ಕೊಂಡ್ ಕೂತಿರೋ ಮೂವಿನಾ ಬೇಗ ನೋಡ್ಬೇಕು! ತಡ ಮಾಡ್ದಷ್ಟೂ ಈ ರಿವ್ಯೂಗಳ್ದು ತಲೆ ನೋವು! ಅದ್ಕೆ ಯಾವ್ ರಿವ್ಯೂನೂ ನೊಡ್ದೆ, ಕೆಲವ್ರು ಬಾಯ್ಮಾತಲ್ಲಿ "ಚೆನ್ನಾಗಿದೆ" "ಚೆನ್ನಾಗಿಲ್ಲ" "ಒಕೆಒಕೆ" "ಸಕ್ಕತ್ತಾಗಿದೆ" ಅಂದವ್ರಿಗೆಲ್ಲಾ, "ಮೂವಿ ಬಗ್ಗೆ ಏನೂ ಹೇಳ್ಬೇಡಾ, ನೋಡ್ಕೊಂಡ್ ಬಂದ್ ಮೇಲ್ ಮಾತಾಡ್ತೀನಿ" ಅಂತ ಹೇಳಿ ಫ್ರೆಂಡ್ ಜೊತೆ ಮೂವಿಗ್ ಹೋದೆ. ಥಿಯೇಟರ್ ಹೌಸ್ ಫುಲ್! ಆದ್ರೆ ನಾವು ಮೊದ್ಲೆ ಬುಕ್ ಮಾಡಿದ್ವಿ, ಹಾಗಾಗಿ ಬಚಾವ್!
ಅರ್ಜುನ್ ಜನ್ಯಾ ಅವ್ರ ಸಂಗೀತ ಮತ್ತು ಹಿನ್ನೆಲೆ ಸಂಗೀತ, ವೆಂಕಟೇಶ್ ಅವ್ರ ಸಿನೆಮಾಟೋಗ್ರಫಿ, ರಕ್ಷಿತ್ ಶೆಟ್ಟಿ - ಹರಿಪ್ರಿಯಾ ಅವ್ರ ರಸಾಯನ ಶಾಸ್ತ್ರ ಅರ್ಥಾತ್ ಕೆಮಿಸ್ಟ್ರಿ ಒಳ್ಳೆ ಕಚಗುಳಿ ಕೊಡ್ತಾ ಹೋಗುತ್ತೆ. ಹೀರೋಗೂ ಸಿಗ್ದೇ ಇರೋ ಎಂಟ್ರಿ ಸಾಧು ಮಹಾರಾಜ್ ಗೆ ಸಿಕ್ದಾಗ ಥಿಯೇಟರಲ್ಲಿ ಫುಲ್ ಶಿಳ್ಳೆಗಳು ಚಪ್ಪಾಳೆಗಳು! ರಿಷಭ್ ಶೆಟ್ರು ರಕ್ಷಿತ್ ಶೆಟ್ರ ಮನೆ ಹತ್ರ ಬಂದು "Here we meet once again" ಅಂದಾಗ, ಬುಳ್ಳಾ ಪಾತ್ರಧಾರಿ ರಘು ಪಾಂಡೇಶ್ವರ್ ಅವ್ರು ಬೂಟ್ಸ್ ಬಗ್ಗೆ ಮಾತಾಡ್ತಾ "ರತ್ನಕ್ಕನ ಮಗಾ ದುಬಾಯಿ ಇಂದ ಕಳ್ಸಿ ಕೊಟ್ಟಿದ್ದು" ಅಂದಾಗ, ಮನ್ಸು ಟಕ್ ಅಂತ 'ಉಳಿದವರು ಕಂಡಂತೆ'ಗೆ ಒಂದ್ ಸುತ್ ಹಾಕಿ ಬರುತ್ತೆ.
ಸಾಧು ಮಹಾರಾಜ್ - ರಘು ಪಾಂಡೇಶ್ವರ ಜೋಡಿ ನಮ್ಮನ್ನ ನಗ್ಸಿದ್ರೂ, ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಸರ್, ಪ್ರಮೋದ್ ಶೆಟ್ಟಿ ಹಾಗೂ ಉಳಿದವ್ರು ಒಳ್ಳೆಯ ಅಭಿನಯ ನೀಡಿದ್ರೂ, ರಿಷಭ್ ಶೆಟ್ರು "ಇದೀಗ ಚಲನಚಿತ್ರಗೀತೆಗಳು ಪ್ರಸಾರವಾಗುತ್ತದೆ" ಅಂತಾ ಜಾಣತನದಿಂದ 'ಮಲಗೆ ಮಲಗೆ' ಹಾಡಿಗೆ ಕೋ ಕೊಟ್ರೂ, ಯಾಕೋ ಫಸ್ಟ್ ಹಾಫಲ್ಲಿ ಕಮರ್ಷಿಯಲ್ ಎಲಿಮೆಂಟ್ಸನ್ನ ಹಾಕ್ಬೇಕು ಅಂತ ಕಾಮಿಡಿ ಸೀನ್ ಗಳನ್ನ ಹಾಗೂ ಒಂದೆರ್ಡು ಹಾಡ್ಗಳನ್ನ ತುರುಕ್ಸಿದಾರೆ ಅಂತ ಅನ್ಸ್ತು ನಂಗೆ. ಫಸ್ಟ್ ಹಾಫ್ ಲೈವ್ಲಿ ಆಗಿದ್ರೂ, ಸೆಕೆಂಡ್ ಹಾಫನ್ನೇ ಗ್ರಿಪ್ಪಿಂಗ್ ಆಗಿ ತೆಗೊಂಡ್ ಹೋಗಿದಾರೆ ಅನ್ನೋದು ನನ್ ಅಭಿಪ್ರಾಯ.
"ಚಿತ್ರದ ಟ್ರೇಲರ್ ಕೊಟ್ಟಂತಹ ಹೆವೀ ಕಿಕ್ಕನ್ನಾ, ಚಿತ್ರದ ಹಾಡುಗಳು ಕೊಟ್ಟಂತಹ ಮುದವನ್ನಾ, ಒಟ್ಟು ಚಿತ್ರ ಕೊಡದೇ ಇದ್ರೂ, ಎಲ್ಲರೂ ನೋಡಬಹುದಾದ ಹಾಗೂ ನೋಡಬೇಕಾದ ಒಳ್ಳೆಯ ಸಂದೇಶವಿರುವ ಕನ್ನಡ ಚಿತ್ರ ರಿಕ್ಕಿ" ಇದು ಥಿಯೇಟರಿಂದ ಹೊರಗ್ ಬಂದಾಗ ನಂಗನ್ಸಿದ್ದು! ಆದ್ರೆ.. ಆದ್ರೆ.. ಮೂವಿ ಸಬ್ಜೆಕ್ಟ್ ನಂಗೆ ಯಾವಾಗ ಸಕ್ಕತ್ ನಾಟ್ತು ಅಂದ್ರೆ, ಮೂವಿ ನೋಡಿ ಎರಡ್ ದಿನದ್ ನಂತ್ರ ಸೈಕಲಲ್ಲಿ ಆಫೀಸಿಗ್ ಬರ್ತಾ ಇರೋವಾಗ, ನನ್ ಆಫೀಸ್ ಇರೋದು SEZ - ಸ್ಪೆಶಲ್ ಎಕನಾಮಿಕ್ ಝೋನಲ್ಲಿ ಅಂತ ಫ್ಲ್ಯಾಶ್ ಆದಾಗ! ಕಂಪೆನಿಯವ್ರಂತೂ SEZ ಅಲ್ಲಿ ಸೌಕರ್ಯ ಸಿಗುತ್ತೆ ಅಂತ ಬಂದ್ ಬಿಡ್ತಾರೆ, ನಾವುಗಳು ಸಂಬಳ ಸಿಗುತ್ತೆ ಅಂತ ಹೋಗ್ಬಿಡ್ತೀವಿ, ಆದ್ರೆ SEZ ಆಗೋ ಸಮಯದಲ್ಲಿ ಅಲ್ಲಿ ಎಷ್ಟು ಸಾವು ನೋವಾಗಿರ್ಬಹುದು? ಎಷ್ಟು ರಾಧಾ- ಕೃಷ್ಣರ ಪ್ರೀತಿ ದಡ ಸೇರ್ದೆ ಮುಳುಗಿರ್ಬಹುದು? ಎಷ್ಟ್ ಜನ ತಾವು ತಮ್ಮ ಹಿರಿಕರು ಹುಟ್ಟಿ ಬೆಳ್ದಿದ್ದ ಮನೆ, ಜಾಗಗಳನ್ನ ಕೆಡವೋದನ್ನ ನೋಡಿ ಮರುಗಿರಬಹುದು? ನನ್ ಆಫೀಸ್ ಕೂಡಾ ಯಾರ್ದೋ ಕನಸಿನ್ ಗೋರಿ ಮೇಲ್ ಇರ್ಬಹುದಾ? ಈ ಎಲ್ಲಾ ಯೋಚ್ನೆಗಳು ಸಾಲು ಸಾಲಾಗಿ ಬಂದಾಗ ಇಂತಹ ಒಂದು ಸಬ್ಜೆಕ್ಟ್ ಬಗ್ಗೆ ಮೂವಿ ಮಾಡಿದ್ದಕ್ಕೆ ರಿಷಭ್ರನ್ನು ಒಂದೆರ್ಡು ಲೆವೆಲ್ ಜಾಸ್ತಿ ಮನಸಾರೆ ಮೆಚ್ಚಿದೆ. ನನ್ ಆಫಿಸ್ ಇರೋ SEZ ಅಲ್ಲಿ ಇಂತಹ ಕಹಿ ಘಟನೆಗಳು ನಡೆದಿದ್ದ್ಯೋ ಇಲ್ವೊ ನಂಗ್ ಗೊತ್ತಲ್ಲ. ಆದ್ರೆ ಉಡುಪಿ ಮಂಗಳೂರಲ್ಲಿ SEZ ವಿರುದ್ಧ ಧ್ವನಿಯನ್ನಂತೂ ನಾನ್ ಕೇಳಿದೀನಿ. ಈ ಎಲ್ಲಾ ಕಾರಣಗಳಿಂದ ಎಸ್ಪೆಶಲಿ ಹಿನ್ನೆಲೆ ಸಂಗೀತದಿಂದ ನನ್ನ ನೆಚ್ಚಿನ ಚಿತ್ರಗಳ ಸಾಲಿಗೆ ರಿಕ್ಕಿಯೂ ಸೇರುತ್ತೆ! ನನ್ನ ನೆಚ್ಚಿನ ಕನ್ನಡದ ಉದಯೋನ್ಮುಖ ನಿರ್ದೇಶಕರ ಸಾಲಿಗೆ ರಿಷಭ್ರೂ ಸೇರ್ಪಡೆ ಆಗ್ತಾರೆ.
PS: ರಕ್ಷಿತ್ ಶೆಟ್ರೆ.. ಇಲ್ ಕೇಳಿ ಮಾರ್ರೆ.. ನೀವ್ ಇಷ್ಟ್ ಚೆಂದ ಮಾಡಿ ಅಳ್ತ್ರಿ ಅಂತ ಗೊತ್ತಿರ್ಲಾ! ಮುಂಗಾರು ಮಳೆ ಗಣೇಶ್ ನಂತ್ರ ಒಂದ್ ಹೀರೋ ಅತ್ತು ನನ್ನ್ ಕಣ್ಣಂಚಲ್ ನೀರ್ ತರ್ಸಿದ್ ಅಂದ್ರೆ ನೀವೇ!

Naresh Bhatre, the movie is really good. I was in a hangover of movie for almost a week.
ReplyDeleteAnd you have written well. The exact details. People should understand this pain shown. I feel everyone's mind is money making and business. People nowadays don't have humanity. Hope to see the world change by these kind of movies.
And the love story shown is just just perfect and awesome. True love story!
I have shared this link to many of my friends. Keep going :)
ತಡವಾಗಿ ಓದಿದೆ ಕ್ಷಮೆ ಇರಲಿ :) ತುಂಬು ಹೃದಯದ ಧನ್ಯವಾದಗಳು ಮಗ :) ಲೆಟ್ಸ್ ಹೋಪ್ ಫಾರ್ ಗುಡ್ ಥಿಂಗ್ಸ್ :)
DeleteChennagi barediddira
ReplyDeleteತಡವಾಗಿ ಓದಿದೆ, ಕ್ಷಮೆ ಇರಲಿ :) ತುಂಬು ಹೃದಯದ ಧನ್ಯವಾದಗಳು :)
ReplyDeleteರಿಕ್ಕಿ ಮೂವಿ ಇಷ್ಟ ಆಯ್ತು. ಮೈ ಪೆಟ್ ನೇಮ್ ರಾಧೆ. ಅಂಡ್ ಐ ಆಮ್ ಸೋ ಹ್ಯಾಪಿ ಫಾರ್ ಹರ್ಡಿಂಗ್ ದಟ್ ನೇಮ್ ವಿತ್ ಕ್ರಿಷ್ಣ. ಮೈ ಲವ್ಲೀ ಗಾಡ್ ಈಸ್ ಕೃಷ್ಣ.
ReplyDeleteಮೂವಿ ಚೆನ್ನಾಗಿದೆ. ಇಷ್ಟ ಆಯ್ತು. ಅದ್ಕೆ ಸರ್ಚ್ ಮಾಡಿದೆ.
ReplyDeleteಯುವರ್ ಕಾಮೆಂಟಿಗ್ ಸ್ಟೈಲ್ ಈಸ್ ನೈಸ್..... ಕೀಪ್ ಗೋಯಿಂಗ್ ಆನ್....ಆಲ್ ದ ಬೆಸ್ಟ್....
ReplyDeleteತಡವಾಗಿ ಓದಿದೆ, ಕ್ಷಮೆ ಇರಲಿ :) ತುಂಬು ಹೃದಯದ ಧನ್ಯವಾದಗಳು :)
Delete